ಜನವರಿ 22 ಮತ್ತು ಜನವರಿ 26: ಭಾರತದ ಗಣರಾಜ್ಯದ ಭವಿಷ್ಯಕ್ಕಾಗಿ ಹೋರಾಟ

By CPIML (not verified) |

ಭಾರತದಾದ್ಯಂತ ಬಿಜೆಪಿ ಸರ್ಕಾರಗಳು ಮತ್ತು ಪ್ರಬಲ ಮಾಧ್ಯಮಗಳು, ವಿಶೇಷವಾಗಿ ಹಿಂದಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಅಥವಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ನಿಜವಾದ ಪ್ರಚಾರವನ್ನು ಬಿಚ್ಚಿಟ್ಟಿವೆ. ಸಂಘ ಪರಿವಾರವೂ ಸಹ ದೇಶಾದ್ಯಂತ ಉನ್ಮಾದವನ್ನು ಸೃಷ್ಟಿಸಲು ಪ್ರಮುಖ ಜನಾಂದೋಲನ ಕಾರ್ಯಕ್ರಮವನ್ನು ಘೋಷಿಸಿದೆ. ದೈವಪ್ರಭುತ್ವವಲ್ಲದ ದೇಶದಲ್ಲಿ, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳ ಇಂತಹ ಯೋಜಿತ ಮತ್ತು ವ್ಯವಸ್ಥಿತ ರಾಜಕೀಯ ಬಳಕೆಗೆ ಜಗತ್ತು ಸಾಕ್ಷಿಯಾಗಿಲ್ಲ, ಅದೂ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಇದು ಸಾಧ್ಯವಾಗಿಲ್ಲ.

ಕಾರ್ಪೋರೇಟ್ ಹಿಂದುತ್ವ ಕಾರ್ಯಸೂಚಿಗೆ ಪರ್ಯಾಯ ಬೇಕಿದೆ

By Lekha |

- ನಾ ದಿವಾಕರ

ಕರ್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ಸರ್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ  ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. 

ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಕೊಡುಗೆಯನ್ನು ನಿರ್ನಾಮಗೊಳಿಸುತ್ತಿರುವ ಆರ್‍ಎಸ್‍ಎಸ್

By Lekha |

ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಅವರೇ ಸೃಷ್ಠಿಸಿರುವ ಹಿಜಾಬ್ ವಿವಾದವನ್ನು ಕುರಿತು ಬರೆಯುವ ಮೊದಲು, ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವಲ್ಲಿ ಕ್ರಾಂತಿಕಾರಿ ಹೋರಾಟ ನಡೆದ ಬಗ್ಗೆ ಚುಟುಕು ಇತಿಹಾಸವನ್ನು ಮೆಲಕು ಹಾಕಲು ಬಯಸುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವೆಂದು ಪರಿಗಣಿಸಿದ್ದ ಇತಿಹಾಸವಿರುವ ಈ ಸಮಾಜದಲ್ಲಿ, ಮೊದಲಿಗೆ, ಅವರೆಲ್ಲರಿಗೂ ಶಿಕ್ಷಣ ದೊರಕಬೇಕೆಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ರವರು ಮಾಡಿದ ಕ್ರಾಂತಿಕಾರಿ ಹೋರಾಟದ ಫಲ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಸ್ವಾತಂತ್ರ್ಯ ಸಂಗ್ರಾಮ ಮತ್ತು ವಿಭಜನೆ: ಈ ಅನುಭವಗಳಿಂದ ಭಾರತ ಕಲಿಯುವುದೇನಿದೆ?

By Lekha |

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಎಲ್ಲ ಹಿಂದೂ ಪರಮಾಧಿಕಾರವನ್ನು ಪ್ರತಿಪಾದಿಸುವ ಎಲ್ಲ ಬಣಗಳೂ ಸಹ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿದ್ದವು. ಬದಲಾಗಿ ಬ್ರಿಟೀಷರ ವಸಾಹತು ಆಳ್ವಿಕೆಯ ಒಡೆದು ಆಳುವ ನೀತಿಗೆ ಒತ್ತಾಸೆಯಾಗಿ, ಜನತೆಯ ಐಕ್ಯತೆಯನ್ನು ಭಂಗಗೊಳಿಸುವ ಹಿಂದೂ-ಮುಸ್ಲಿಂ ವಿಭಜನೆಯ ಪರವಾಗಿ ನಿಂತ್ತಿದ್ದವು. ಈ ಒಡೆದು ಆಳುವ ನೀತಿಯೇ ದೇಶದ ರಕ್ತಸಿಕ್ತ ವಿಭಜನೆಗೂ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಸ್ಥಾಪನೆಯೂ ಕಾರಣವಾಗಿತ್ತು. ನಂತರದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಿತ್ತು.

ಮುಸಲ್ಮಾನ್‌ರ ವಿರುದ್ಧ ರಾಜ್ಯ ಪ್ರಯೋಜಿತ ದಾಳಿ

By ಸಿಪಿಐ-ಎಂಎಲ್ ಲಿಬರೇಶನ್ |

- ಮೈತ್ರೇಯಿ ಕೃಷ್ಣನ್ ಮತ್ತು ರಘುಪತಿ ಸಿದ್ದಯ್ಯ

 

ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರ ಮೇಲೆ ಸಂಘಟಿತ ಮತ್ತು ಆಗಾಗ್ಗೆ ರಾಜ್ಯ ಪ್ರಾಯೋಜಿತ ದಾಳಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಕಾರ್ಮಿಕ ವರ್ಗಕ್ಕೆ ಸೇರಿದ ಮುಸ್ಲಿಮರ ಜೀವನೋಪಾಯದ ಮೇಲಿನ ದಾಳಿಗಳು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿದ್ದಾವೆ.

ಗೋಲ್ವಾಲ್‍ಕರ್ ಚಿಂತನೆಯ ಭಾರತ

By ಸಿಪಿಐ-ಎಂಎಲ್ ಲಿಬರೇಶನ್ |

2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ  ಸಂದೇಶವನ್ನು ನೀಡಿತ್ತು : “ ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಫಾಸಿವಾದಿ ಧೋರಣೆ

By vksgautam |

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಲಾದ ಯೋಜಿತವಲ್ಲದ ಲಾಕ್‍ಡೌನ್‍ಗಳು ಮತ್ತು ನೀತಿಗಳಿಂದ ಭಾರತವು ಹಿಂದೆಂದೂ ಕಂಡರೀಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಒಟ್ಟಾರೆ ಪರಿಣಾಮದಿಂದಾಗಿ ಕೋಟಿಗಟ್ಟಲೆ ಜನರು ಕಡುಬಡತನಕ್ಕೆ ಜಾರಿದ್ದಾರೆ ಮತ್ತು ಬದುಕಲು ಹೆಣಗಾಡುತ್ತಿದ್ದಾರೆ - 84% ಕುಟುಂಬಗಳ ಆದಾಯವು 2021 ರಲ್ಲಿ ಕುಸಿದಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಸೃಷ್ಠಿಯಾಗಿರುವ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ, ಇದೇ ಭಾರತದ ಸಾಧನೆ. ಅದೇ ಸಮಯದಲ್ಲಿ, ಶ್ರೀಮಂತರ ಮೇಲಿನ ತೆರಿಗೆಯನ್ನು ಮೋದಿ ಸರ್ಕಾರ ಕಡಿಮೆ ಮಾಡಿದ್ದರಿಂದ ಶ್ರೀಮಂತರು ಶ್ರೀಮಂತರಾಗಿದ್ದಾರೆ; ಸಂಪತ್ತು ತೆರಿಗೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಾಪೆರ್Çರೇಟ್ ತೆರಿಗೆಗಳನ್ನು 39% ರಿಂದ 22% ಕ್ಕೆ ಇಳಿಸಲಾಗಿದೆ.