ಜನವರಿ 22 ಮತ್ತು ಜನವರಿ 26: ಭಾರತದ ಗಣರಾಜ್ಯದ ಭವಿಷ್ಯಕ್ಕಾಗಿ ಹೋರಾಟ

By CPIML (not verified) |

ಭಾರತದಾದ್ಯಂತ ಬಿಜೆಪಿ ಸರ್ಕಾರಗಳು ಮತ್ತು ಪ್ರಬಲ ಮಾಧ್ಯಮಗಳು, ವಿಶೇಷವಾಗಿ ಹಿಂದಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಅಥವಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ನಿಜವಾದ ಪ್ರಚಾರವನ್ನು ಬಿಚ್ಚಿಟ್ಟಿವೆ. ಸಂಘ ಪರಿವಾರವೂ ಸಹ ದೇಶಾದ್ಯಂತ ಉನ್ಮಾದವನ್ನು ಸೃಷ್ಟಿಸಲು ಪ್ರಮುಖ ಜನಾಂದೋಲನ ಕಾರ್ಯಕ್ರಮವನ್ನು ಘೋಷಿಸಿದೆ. ದೈವಪ್ರಭುತ್ವವಲ್ಲದ ದೇಶದಲ್ಲಿ, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳ ಇಂತಹ ಯೋಜಿತ ಮತ್ತು ವ್ಯವಸ್ಥಿತ ರಾಜಕೀಯ ಬಳಕೆಗೆ ಜಗತ್ತು ಸಾಕ್ಷಿಯಾಗಿಲ್ಲ, ಅದೂ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಇದು ಸಾಧ್ಯವಾಗಿಲ್ಲ.

ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು: ಸಂವಿಧಾನದ ಆಶಯಗಳು ಮತ್ತು ಜನಪರ ಚಳುವಳಿಗಳು

By vksgautam |

- ರತಿ ಈ ಆರ್

ಇಂದು ಸಂವಿಧಾನದ ಆಶಯ ಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಹಿಜಾಬ್-ಕೇಸರಿ ಶಾಲು ವಿವಾದ, ಇದು ಮಹಿಳೆಯ ವಸ್ತ್ರ ಸಂಹಿತೆ ಸಾಲಿಗೆ, 'ದ್ವೇಷ ರಾಜಕಾರಣದ' ಇತ್ತೀಚಿನ ಸೇರ್ಪಡೆ.

ಮೈಸೂರಿನ ಅತ್ಯಾಚಾರ ಪ್ರಕರಣ ದಂದು, ಯೂನಿವರ್ಸಿಟಿ ನಲ್ಲಿ  ವಿದ್ಯಾರ್ಥಿನಿಯರು ಸಂಜೆ 6 ಗಂಟೆ ಮೇಲೆ ಸಾರ್ವಜನಿಕ ವಾಗಿ ಓಡಾಡಲು ನಿರ್ಭಂದ ಹೇರಿದ್ದು ಇನ್ನೂ ಹಸಿಯಾಗಿದೆ. ಕರ್ನಾಟಕ ದಲ್ಲೀ ಸಂಘಿಗಳು ಕರಾವಳಿಯನ್ನು  ಪ್ರಯೋಗಶಾಲೆ ಸ್ಥಾಪಿಸುತ್ತ  ಕೋಮುವಾದಿ-ಕುಲುಮೆ ಮಾಡಲು ಪ್ರೊಜೆಕ್ಟ್  ಹಾಕಿದಾಗಿಂದ ಪ್ರಗತಿಪರರು ದಲಿತರು, ಎಡಪಂತಿಯರು, ಕೆಳಕಂಡ ಮೂರು ಚಲುವಳಿಗಳ ನ್ನು ವಿವಿಧ ಹಂತದಲ್ಲಿ ಚಾಲನೆ ಗೊಳಿಸಿದರು.

ಗೋಲ್ವಾಲ್‍ಕರ್ ಚಿಂತನೆಯ ಭಾರತ

By ಸಿಪಿಐ-ಎಂಎಲ್ ಲಿಬರೇಶನ್ |

2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ  ಸಂದೇಶವನ್ನು ನೀಡಿತ್ತು : “ ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಫಾಸಿವಾದಿ ಧೋರಣೆ

By vksgautam |

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಲಾದ ಯೋಜಿತವಲ್ಲದ ಲಾಕ್‍ಡೌನ್‍ಗಳು ಮತ್ತು ನೀತಿಗಳಿಂದ ಭಾರತವು ಹಿಂದೆಂದೂ ಕಂಡರೀಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಒಟ್ಟಾರೆ ಪರಿಣಾಮದಿಂದಾಗಿ ಕೋಟಿಗಟ್ಟಲೆ ಜನರು ಕಡುಬಡತನಕ್ಕೆ ಜಾರಿದ್ದಾರೆ ಮತ್ತು ಬದುಕಲು ಹೆಣಗಾಡುತ್ತಿದ್ದಾರೆ - 84% ಕುಟುಂಬಗಳ ಆದಾಯವು 2021 ರಲ್ಲಿ ಕುಸಿದಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಸೃಷ್ಠಿಯಾಗಿರುವ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ, ಇದೇ ಭಾರತದ ಸಾಧನೆ. ಅದೇ ಸಮಯದಲ್ಲಿ, ಶ್ರೀಮಂತರ ಮೇಲಿನ ತೆರಿಗೆಯನ್ನು ಮೋದಿ ಸರ್ಕಾರ ಕಡಿಮೆ ಮಾಡಿದ್ದರಿಂದ ಶ್ರೀಮಂತರು ಶ್ರೀಮಂತರಾಗಿದ್ದಾರೆ; ಸಂಪತ್ತು ತೆರಿಗೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಾಪೆರ್Çರೇಟ್ ತೆರಿಗೆಗಳನ್ನು 39% ರಿಂದ 22% ಕ್ಕೆ ಇಳಿಸಲಾಗಿದೆ.

ಬುಲ್ಡೋಜ್ ಮಾಡಲಾದ ನ್ಯಾಯ

By vksgautam |

ಪ್ರಕ್ಷುಬ್ಧಗೊಳಿಸುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಭಾರತದಾದ್ಯಂತ ಹಿಂದೂ ಧಾರ್ಮಿಕ ಹಬ್ಬಗಳನ್ನು ನೆಪವಾಗಿಟ್ಟುಕೊಂಡು, ಆರ್‌ಎಸ್‌ಎಸ್ ಅಂಗಸಂಸ್ಥೆಗಳು ಮುಸ್ಲಿಂ ಪ್ರದೇಶಗಳ ಮೂಲಕ ಬೆದರಿಕೆಯ ಸಶಸ್ತ್ರ ಮೆರವಣಿಗೆಗಳನ್ನು ಆಯೋಜಿಸಿ, ಹಿಂದೂ ಪರಮಾಧಿಕಾರವನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಭಾರತದಲ್ಲಿ ಉಳಿಯಲು ಅವಕಾಶವಿದೆ ಎಂದು ಘೋಷಿಸುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮೊದಲು ರಾಮ ನವಮಿಯಂದು, ಮತ್ತು ನಂತರ ಹನುಮ ಜಯಂತಿಯಂದು, RSS-ಸಂಯೋಜಿತ ಸಂಘಟನೆಗಳು ಮುಸ್ಲಿಮರನ್ನು ಅವಮಾನಿಸುವ, ಬೆದರಿಸುವ ಮತ್ತು ದಾಳಿ ಮಾಡುವ ಉದ್ದೇಶದಿಂದ ಮೆರವಣಿಗೆಗಳನ್ನು ನಡೆಸಿ, ಮಸೀದಿಗಳನ್ನು ಧ್ವಂಸಗೊಳಿಸಿದವು.