ಕಾರ್ಪೋರೇಟ್ ಹಿಂದುತ್ವ ಕಾರ್ಯಸೂಚಿಗೆ ಪರ್ಯಾಯ ಬೇಕಿದೆ

By Lekha |

- ನಾ ದಿವಾಕರ

ಕರ್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ಸರ್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ  ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. 

ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು: ಸಂವಿಧಾನದ ಆಶಯಗಳು ಮತ್ತು ಜನಪರ ಚಳುವಳಿಗಳು

By vksgautam |

- ರತಿ ಈ ಆರ್

ಇಂದು ಸಂವಿಧಾನದ ಆಶಯ ಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಹಿಜಾಬ್-ಕೇಸರಿ ಶಾಲು ವಿವಾದ, ಇದು ಮಹಿಳೆಯ ವಸ್ತ್ರ ಸಂಹಿತೆ ಸಾಲಿಗೆ, 'ದ್ವೇಷ ರಾಜಕಾರಣದ' ಇತ್ತೀಚಿನ ಸೇರ್ಪಡೆ.

ಮೈಸೂರಿನ ಅತ್ಯಾಚಾರ ಪ್ರಕರಣ ದಂದು, ಯೂನಿವರ್ಸಿಟಿ ನಲ್ಲಿ  ವಿದ್ಯಾರ್ಥಿನಿಯರು ಸಂಜೆ 6 ಗಂಟೆ ಮೇಲೆ ಸಾರ್ವಜನಿಕ ವಾಗಿ ಓಡಾಡಲು ನಿರ್ಭಂದ ಹೇರಿದ್ದು ಇನ್ನೂ ಹಸಿಯಾಗಿದೆ. ಕರ್ನಾಟಕ ದಲ್ಲೀ ಸಂಘಿಗಳು ಕರಾವಳಿಯನ್ನು  ಪ್ರಯೋಗಶಾಲೆ ಸ್ಥಾಪಿಸುತ್ತ  ಕೋಮುವಾದಿ-ಕುಲುಮೆ ಮಾಡಲು ಪ್ರೊಜೆಕ್ಟ್  ಹಾಕಿದಾಗಿಂದ ಪ್ರಗತಿಪರರು ದಲಿತರು, ಎಡಪಂತಿಯರು, ಕೆಳಕಂಡ ಮೂರು ಚಲುವಳಿಗಳ ನ್ನು ವಿವಿಧ ಹಂತದಲ್ಲಿ ಚಾಲನೆ ಗೊಳಿಸಿದರು.

ಗೋಲ್ವಾಲ್‍ಕರ್ ಚಿಂತನೆಯ ಭಾರತ

By ಸಿಪಿಐ-ಎಂಎಲ್ ಲಿಬರೇಶನ್ |

2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ  ಸಂದೇಶವನ್ನು ನೀಡಿತ್ತು : “ ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಫಾಸಿವಾದಿ ಧೋರಣೆ

By vksgautam |

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಲಾದ ಯೋಜಿತವಲ್ಲದ ಲಾಕ್‍ಡೌನ್‍ಗಳು ಮತ್ತು ನೀತಿಗಳಿಂದ ಭಾರತವು ಹಿಂದೆಂದೂ ಕಂಡರೀಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಒಟ್ಟಾರೆ ಪರಿಣಾಮದಿಂದಾಗಿ ಕೋಟಿಗಟ್ಟಲೆ ಜನರು ಕಡುಬಡತನಕ್ಕೆ ಜಾರಿದ್ದಾರೆ ಮತ್ತು ಬದುಕಲು ಹೆಣಗಾಡುತ್ತಿದ್ದಾರೆ - 84% ಕುಟುಂಬಗಳ ಆದಾಯವು 2021 ರಲ್ಲಿ ಕುಸಿದಿದೆ. ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಸೃಷ್ಠಿಯಾಗಿರುವ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ, ಇದೇ ಭಾರತದ ಸಾಧನೆ. ಅದೇ ಸಮಯದಲ್ಲಿ, ಶ್ರೀಮಂತರ ಮೇಲಿನ ತೆರಿಗೆಯನ್ನು ಮೋದಿ ಸರ್ಕಾರ ಕಡಿಮೆ ಮಾಡಿದ್ದರಿಂದ ಶ್ರೀಮಂತರು ಶ್ರೀಮಂತರಾಗಿದ್ದಾರೆ; ಸಂಪತ್ತು ತೆರಿಗೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಾಪೆರ್Çರೇಟ್ ತೆರಿಗೆಗಳನ್ನು 39% ರಿಂದ 22% ಕ್ಕೆ ಇಳಿಸಲಾಗಿದೆ.