ಜನವರಿ 22 ಮತ್ತು ಜನವರಿ 26: ಭಾರತದ ಗಣರಾಜ್ಯದ ಭವಿಷ್ಯಕ್ಕಾಗಿ ಹೋರಾಟ

By CPIML (not verified) |

ಭಾರತದಾದ್ಯಂತ ಬಿಜೆಪಿ ಸರ್ಕಾರಗಳು ಮತ್ತು ಪ್ರಬಲ ಮಾಧ್ಯಮಗಳು, ವಿಶೇಷವಾಗಿ ಹಿಂದಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಅಥವಾ ಪ್ರತಿಷ್ಠಾಪನೆಗೆ ಮುಂಚಿತವಾಗಿ ನಿಜವಾದ ಪ್ರಚಾರವನ್ನು ಬಿಚ್ಚಿಟ್ಟಿವೆ. ಸಂಘ ಪರಿವಾರವೂ ಸಹ ದೇಶಾದ್ಯಂತ ಉನ್ಮಾದವನ್ನು ಸೃಷ್ಟಿಸಲು ಪ್ರಮುಖ ಜನಾಂದೋಲನ ಕಾರ್ಯಕ್ರಮವನ್ನು ಘೋಷಿಸಿದೆ. ದೈವಪ್ರಭುತ್ವವಲ್ಲದ ದೇಶದಲ್ಲಿ, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳ ಇಂತಹ ಯೋಜಿತ ಮತ್ತು ವ್ಯವಸ್ಥಿತ ರಾಜಕೀಯ ಬಳಕೆಗೆ ಜಗತ್ತು ಸಾಕ್ಷಿಯಾಗಿಲ್ಲ, ಅದೂ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಇದು ಸಾಧ್ಯವಾಗಿಲ್ಲ.

ಜನತೆಯ ಪ್ರಜಾಪ್ರಭುತ್ವಕ್ಕಾಗಿ ಅವಿಶ್ರಾಂತ ಹೋರಾಡಿದ ಕಾಮ್ರೇಡ್ ವಿನೋದ್‌ ಮಿಶ್ರಾ

By CPIML (not verified) |

ಈ ವರ್ಷ ನಾವು ಕಾಮ್ರೇಡ್ ವಿನೋದ್ ಮಿಶ್ರಾ ಅವರ ಇಪ್ಪತ್ತೈದನೇ ಸ್ಮರಣ ದಿನವನ್ನು ಆಚರಿಸುತ್ತಿದ್ದೇವೆ. ನಕ್ಸಲ್‌ಬಾರಿ ನಂತರದ ಹಂತದಲ್ಲಿ ಸಿಪಿಐ (ಎಂಎಲ್)ನ ಮರುಸಂಘಟನೆ, ವಿಸ್ತರಣೆ ಮತ್ತು ಬಲವರ್ಧನೆಗೆ ಅವರ ಐತಿಹಾಸಿಕ ಕೊಡುಗೆಯನ್ನು ನಾವು ನೆನಪಿಸಿಕೊಳ್ಳುವಾಗ ಮತ್ತು ಅವರ ಸದಾ ಸ್ಪೂರ್ತಿದಾಯಕ ಕ್ರಾಂತಿಕಾರಿ ಪರಂಪರೆಗೆ ಗೌರವ ಸಲ್ಲಿಸುವಾಗ, ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲಿನ ಫ್ಯಾಸಿಸ್ಟ್ ದಾಳಿಯನ್ನು ವಿಫಲಗೊಳಿಸುವ ಇಂದಿನ ಕೇಂದ್ರ ಸವಾಲಿನ ಹಿನ್ನೆಲೆಯಲ್ಲಿ ಅವರ ಪ್ರಮುಖ ಆಲೋಚನೆಗಳು ಮತ್ತು ಕೊಡುಗೆಗಳನ್ನು ಮರುಪರಿಶೀಲಿಸುವುದು ಹೆಚ್ಚು ಸೂಕ್ತವಾಗಿದೆ.

ಜುಲೈ 28, 2021ರ ಪ್ರತಿಜ್ಞೆ

By CPIML (not verified) |

ಫ್ಯಾಸಿಸ್ಟ್ ಮೋದಿ ಆಡಳಿತದ ವಿರುದ್ಧ ಜನರ ನಿರ್ಣಾಯಕ ಹಂತದ ಚಳುವಳಿಗಾಗಿ ಸಿದ್ಧರಾಗಿ!

ಜುಲೈ 28, 2021, ಕಾಮ್ರೇಡ್ ಚಾರು ಮಜುಂದಾರ್ ಅವರ 49 ನೇ ವರ್ಷದ ಸ್ಮರಣಾ ದಿನಾಚರಣೆಯ ಮತ್ತು ಸಿಪಿಐ (ಎಂಎಲ್) ಪುನರ್‍ಸ್ಥಾಪನೆಯಾದ 47 ನೇ ವಾರ್ಷಿಕೋತ್ಸವದ ದಿನವಾಗಿರುತ್ತದೆ. 1970ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ನಡೆದ ಕುಖ್ಯಾತ 1975 ರ ತುರ್ತು ಪರಿಸ್ಥಿತಿ ಘಟನೆ ನಡೆದು ಈಗ ಐದು ದಶಕಗಳು ಕಳೆದಿದ್ದೂ, ಮತ್ತೊಮ್ಮೆ ಭಾರತ ದೇಶವು ತುರ್ತುಪರಿಸ್ಥಿತಿ ದಮನಕಾರಿ ಆಡಳಿತಕ್ಕೆ ಮರಳಿದೆ, ಈ ರೀತಿಯಲ್ಲಿ ಆಗಾಗ್ಗೆ ವಸಾಹತುಶಾಯಿ ಅವಧಿಯ ಕ್ರೌರ್ಯ ಮತ್ತು ದಬ್ಬಾಳಿಕೆ ನಡೆಸುತ್ತಿರುವುದು ಅವಮಾನಕರವಾದ ಸಂಗತಿಯಾಗಿದೆ.

ಸ್ವಾತಂತ್ರ್ಯ ಸಂಗ್ರಾಮ ಮತ್ತು ವಿಭಜನೆ: ಈ ಅನುಭವಗಳಿಂದ ಭಾರತ ಕಲಿಯುವುದೇನಿದೆ?

By Lekha |

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಎಲ್ಲ ಹಿಂದೂ ಪರಮಾಧಿಕಾರವನ್ನು ಪ್ರತಿಪಾದಿಸುವ ಎಲ್ಲ ಬಣಗಳೂ ಸಹ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿದ್ದವು. ಬದಲಾಗಿ ಬ್ರಿಟೀಷರ ವಸಾಹತು ಆಳ್ವಿಕೆಯ ಒಡೆದು ಆಳುವ ನೀತಿಗೆ ಒತ್ತಾಸೆಯಾಗಿ, ಜನತೆಯ ಐಕ್ಯತೆಯನ್ನು ಭಂಗಗೊಳಿಸುವ ಹಿಂದೂ-ಮುಸ್ಲಿಂ ವಿಭಜನೆಯ ಪರವಾಗಿ ನಿಂತ್ತಿದ್ದವು. ಈ ಒಡೆದು ಆಳುವ ನೀತಿಯೇ ದೇಶದ ರಕ್ತಸಿಕ್ತ ವಿಭಜನೆಗೂ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಸ್ಥಾಪನೆಯೂ ಕಾರಣವಾಗಿತ್ತು. ನಂತರದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಿತ್ತು.

ನಮ್ಮ ಸ್ವಾತಂತ್ರ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರ

By ಸಿಪಿಐ-ಎಂಎಲ್ ಲಿಬರೇಶನ್ |

ಅರಿಂದಾಮ್ ಸೇನ್

(ಲಿಬರೇಷನ್ ಜುಲೈ 1997)

ಡಿ ಡಿ ಕೊಸಂಬಿರವರ 1946ರ ಲೇಖನ, ' ಭಾರತ ದಲ್ಲಿ ಬೂರ್ಜ್ವಾಗಳು ಒಂದು ಪ್ರಬುದ್ಧತೆಗೆ ಬಂದರು ' ಎಂಬುದರ ವಿಸ್ತ್ರಿತ ಭಾಗ. ಮುಂಬೈ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿದ್ದಾಗ ಅವರೆಲ್ಲರೂ ತಮ್ಮ ಬಂಧನ ನಿಶ್ಚಿತ ಎಂದು ತಿಳಿದಿದ್ದರು. ಅವರುಗಳು ಅದಕ್ಕೆ ತಯ್ಯಾರಿ ಯಾಗಿ, ತಮ್ಮ ಎಲ್ಲಾ ಕುಟುಂಬದ ವ್ಯವಹಾರ ಮತ್ತು ವೈಯಕ್ತಿಕ ಹಣ ಕಾಸಿನ ಸ್ಥಿತಿ ಯನ್ನು ಮುಂದಿನ ಒಂದು ಎರಡು ವರ್ಷಗಳಿಗೆ  ಎಲ್ಲಾ ರೀತಿಯ ಸಂದರ್ಭ ಗಳಿಗೆ ಸಿದ್ಧ ಪಡಿಸಿದ್ದರು.

ಮುಸಲ್ಮಾನ್‌ರ ವಿರುದ್ಧ ರಾಜ್ಯ ಪ್ರಯೋಜಿತ ದಾಳಿ

By ಸಿಪಿಐ-ಎಂಎಲ್ ಲಿಬರೇಶನ್ |

- ಮೈತ್ರೇಯಿ ಕೃಷ್ಣನ್ ಮತ್ತು ರಘುಪತಿ ಸಿದ್ದಯ್ಯ

 

ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರ ಮೇಲೆ ಸಂಘಟಿತ ಮತ್ತು ಆಗಾಗ್ಗೆ ರಾಜ್ಯ ಪ್ರಾಯೋಜಿತ ದಾಳಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಕಾರ್ಮಿಕ ವರ್ಗಕ್ಕೆ ಸೇರಿದ ಮುಸ್ಲಿಮರ ಜೀವನೋಪಾಯದ ಮೇಲಿನ ದಾಳಿಗಳು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿದ್ದಾವೆ.

ಬುಲ್ಡೋಜ್ ಮಾಡಲಾದ ನ್ಯಾಯ

By vksgautam |

ಪ್ರಕ್ಷುಬ್ಧಗೊಳಿಸುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಭಾರತದಾದ್ಯಂತ ಹಿಂದೂ ಧಾರ್ಮಿಕ ಹಬ್ಬಗಳನ್ನು ನೆಪವಾಗಿಟ್ಟುಕೊಂಡು, ಆರ್‌ಎಸ್‌ಎಸ್ ಅಂಗಸಂಸ್ಥೆಗಳು ಮುಸ್ಲಿಂ ಪ್ರದೇಶಗಳ ಮೂಲಕ ಬೆದರಿಕೆಯ ಸಶಸ್ತ್ರ ಮೆರವಣಿಗೆಗಳನ್ನು ಆಯೋಜಿಸಿ, ಹಿಂದೂ ಪರಮಾಧಿಕಾರವನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ಭಾರತದಲ್ಲಿ ಉಳಿಯಲು ಅವಕಾಶವಿದೆ ಎಂದು ಘೋಷಿಸುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮೊದಲು ರಾಮ ನವಮಿಯಂದು, ಮತ್ತು ನಂತರ ಹನುಮ ಜಯಂತಿಯಂದು, RSS-ಸಂಯೋಜಿತ ಸಂಘಟನೆಗಳು ಮುಸ್ಲಿಮರನ್ನು ಅವಮಾನಿಸುವ, ಬೆದರಿಸುವ ಮತ್ತು ದಾಳಿ ಮಾಡುವ ಉದ್ದೇಶದಿಂದ ಮೆರವಣಿಗೆಗಳನ್ನು ನಡೆಸಿ, ಮಸೀದಿಗಳನ್ನು ಧ್ವಂಸಗೊಳಿಸಿದವು.