ಫ್ಯಾಶಿಸಂ ವಿರುದ್ಧ ಕರ್ನಾಟಕವನ್ನು ನಿರ್ಮಿಸೋಣ

By CPIML (not verified) |

ಕರ್ನಾಟಕ ರಾಜ್ಯದ ಜನರು ಬಿಜೆಪಿಯ ದುರಾಡಳಿತದ ಪರಿಣಾಮ ಭ್ರಷ್ಟಾಚಾರ, ಮಿತಿಮೀರಿದ ಜೀವನ ವೆಚ್ಚ, ಹೆಚ್ಚಿದ ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಧಾರ್ಮಿಕ ದ್ವೇಷ ಮತ್ತು ಕೋಮು ಧ್ರುವೀಕರಣದಿಂದ ನಲುಗಿ ಈಗಷ್ಟೇ ಅದರಿಂದ ಹೊರಬಂದಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ಎರಡನೇ ರಾಜ್ಯ ಸಮ್ಮೇಳನ ವನ್ನು ಡಿಸೆಂಬರ್ 9 ಮತ್ತು 10, 2023ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಲಾಗಿತ್ತು.

ಅಸಹಜ ಸಾವುಗಳೂ ಆಡಳಿತ ಕ್ರೌರ್ಯವೂ

By Lekha |

ಕೋವಿದ್ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ಆಡಳಿತ ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಚುರುಕುಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದಲ್ಲಿ ಅಪರೂಪವೇ ಆಗಿರುವ ನಾಗರಿಕ ಹೊಣೆಗಾರಿಕೆ ಮತ್ತು ಮಾನವ ಸಂವೇದನೆ ಕೊಂಚವಾದರೂ ಕಾಣುವಂತಿರಬೇಕಿತ್ತು. ದಿನನಿತ್ಯ ಸಾವುಗಳನ್ನು ಎಣಿಸುವ ಅಧಿಕಾರ ಕೇಂದ್ರಗಳಲ್ಲಿ ಪ್ರತಿಯೊಂದು ಸಾವು ಮನಸನ್ನು ಪ್ರಕ್ಷುಬ್ಧಗೊಳಿಸುವ ವಿಕ್ಷಿಪ್ತತೆಯನ್ನು ಉಂಟುಮಾಡಬೇಕಿತ್ತು. ಇಡೀ ಸಮಾಜವೇ ಆರೋಗ್ಯದಿಂದಿದೆ ಎನ್ನುವ ಭ್ರಮೆಯಲ್ಲಿದ್ದ ಪ್ರಜೆಗಳಿಗೆ ಒಮ್ಮಿಂದೊಮ್ಮೆಲೆ ಸರಣಿ ಸಾವುಗಳು ಎದುರಾದಾಗ ನಮ್ಮ ಸಮಾಜ ಆಘಾತಕ್ಕೊಳಗಾಗಬೇಕಿತ್ತು.

ಸಿದ್ದಲಿಂಗಯ್ಯ ನಮನ

By CPIML (not verified) |

ಸುಪ್ರಸಿದ್ದ ಬಂಡಾಯ ಸಾಹಿತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಿಧನರಾಧರು. ಅವರು ಸಾವಿರದ ಓಂಬೈನೂರು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಎಡಪಂಥೀ ಯ ಮತ್ತು ದಲಿತ ಚಳುವಳಿಯ ಮುಖ್ಯ ಪ್ರತಿನಿದಿಯಾಗಿದ್ದವರು. ನಮ್ಮ ದೇಶದ ಕ್ರಾಂತಿಕಾರಿ ಮತ್ತು ಜನಪರ ಚಳುವಳಿಯ ಅತ್ಯಂತ ಉತ್ಕ ರ್ಷದ ಪರ್ವ 70 ರ ದಶಕ ಕಾಲ. 67 ರ ನಕ್ಸಲಬಾರಿ, ವಿಯತ್ನಾಮ್ ಯುದ್ಧ, ಪ್ರಪಂಚಾದ್ಯಂತ ಅಮೆರಿಕನ್.ಸಾಮ್ರಾಜ್ಯ ಶಾಯಿಯ ವಿರುದ್ಧ ಪ್ರತಿರೋಧ. ಎಲ್ಲಾ ದೇಶಗಲ್ಲಿ ವರ್ಗ ಹೋರಾಟ ಗಳಿಂದಾಗಿ ಎಲ್ಲೆಡೆಯಲ್ಲಿಯೂ ಕ್ರಾಂತಿಕಾರಿ ಸನ್ನಿವೇಶ. ಅದೇ ಸಮಯದಲ್ಲಿ ಅಮೆರಿಕದ ಕಪ್ಪು ಜನರ ಬ್ಲ್ಯಾಕ್ ಪ್ಯಾಂಥರ್ ಚಳುವಳಿ ಎಲ್ಲರ ಗಮನ ಸೆಳೆದಿತ್ತು.

ಬಂಧನದಲ್ಲಿದ್ದ ಸ್ಟಾನ್ ಸ್ವಾಮಿಯವರ ಸಾವಿಗೆ ಆಕ್ರೋಶ ಮತ್ತು ಶೋಕ

By CPIML (not verified) |

ಬಂಧನದಲ್ಲಿದ್ದ ಜೆಸ್ಯೂಟ್ ಸಮಾಜ ಸೇವಕರಾದ 84 ವರ್ಷ ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿಯವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮತ್ತು ದುಃಖದಲ್ಲಿರುವ ಜಾಖರ್ಂಡ್ ಮತ್ತು ಇಡೀ ಭಾರತದ ಬಡ ಮತ್ತು ತುಳಿತಕ್ಕೊಳಗಾದ ಜನರೊಂದಿಗೆ ಸಿಪಿಐಎಂಎಲ್ ಜೊತೆಗಿರುತ್ತದೆ. ಮೋದಿ ಆಡಳಿತದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ), “ಭೀಮಾ ಕೋರೆಗಾಂವ್ ಪ್ರಕರಣ"ಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಪರ ಹೋರಾಟ ಮಾಡುವ ಪ್ರಮುಖ ಹೋರಾಟಗಾರನ್ನು ನಿರಂತರವಾಗಿ ಬಂಧಿಸುತ್ತಿದೆ. ಮತ್ತು ಅವರಿಗೆ ಜಾಮೀನು ನಿರಾಕರಿಸುವ ಸಲುವಾಗಿ ಕಠಿಣ ಯುಎಪಿಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ದೀರ್ಘಕಾಲದ ವರೆಗೆ ವಿಚಾರಣಾಧೀನ ಖೈದಿಯನ್ನಾಗಿ ಬಂಧನದಲ್ಲಿರಿಸಲಾಗುತ್ತಿದೆ.

ಜನಸಾಮಾನ್ಯರ ಮೇಲೆ ನಡೆಯುತ್ತಿರುವ ಫ್ಯಾಸಿಸ್ಟ್ ಕಾರ್ಪೋರೇಟ್ ಪ್ರಹಾರ

By Lekha |

ಭಾರತದ 71ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ರೈತಾಪಿ ಮತ್ತು ಸಾಮಾನ್ಯ ಜನತೆ ತಮ್ಮ ಅಭೂತಪೂರ್ವ ಚಳುವಳಿಯ ಮೂಲಕ ಗಣತಂತ್ರ ವ್ಯವಸ್ಥೆಯ ಸ್ಫೂರ್ತಿಯನ್ನು ಪ್ರದರ್ಶಿಸಿದ್ದೇ ಅಲ್ಲದೆ, ಸಾರ್ವಭೌಮ ಪ್ರಜೆಗಳ ಪ್ರತಿರೋಧದ ದನಿ ಹಾಗೂ ಐಕ್ಯತೆಯನ್ನು ಪ್ರದರ್ಶಿಸಿದ್ದರು.

ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಕೊಡುಗೆಯನ್ನು ನಿರ್ನಾಮಗೊಳಿಸುತ್ತಿರುವ ಆರ್‍ಎಸ್‍ಎಸ್

By Lekha |

ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಅವರೇ ಸೃಷ್ಠಿಸಿರುವ ಹಿಜಾಬ್ ವಿವಾದವನ್ನು ಕುರಿತು ಬರೆಯುವ ಮೊದಲು, ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವಲ್ಲಿ ಕ್ರಾಂತಿಕಾರಿ ಹೋರಾಟ ನಡೆದ ಬಗ್ಗೆ ಚುಟುಕು ಇತಿಹಾಸವನ್ನು ಮೆಲಕು ಹಾಕಲು ಬಯಸುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವೆಂದು ಪರಿಗಣಿಸಿದ್ದ ಇತಿಹಾಸವಿರುವ ಈ ಸಮಾಜದಲ್ಲಿ, ಮೊದಲಿಗೆ, ಅವರೆಲ್ಲರಿಗೂ ಶಿಕ್ಷಣ ದೊರಕಬೇಕೆಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ರವರು ಮಾಡಿದ ಕ್ರಾಂತಿಕಾರಿ ಹೋರಾಟದ ಫಲ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.