ಕಾಮ್ರೇಡ್ ಇದ್ಲಿ ರಾಮಪ್ಪ ಗ್ರಾಮೀಣ ಬಡಜನರ ಸ್ಪೂರ್ತಿಜನಕ ಹೋರಾಟಗಾರ

By Lekha |

ಡಿಸೆಂಬರ್ 31, 2023 ರಂದು 60 ವಯಸ್ಸಿನ ಕಾಮ್ರೇಡ್ ಇದ್ಲಿ ರಾಮಪ್ಪ ಅವರು ಹೃದಯಾಘಾತದಿಂದ ತೀರಿಕೊಂಡರು. ಸಿಪಿಐ (ಎಎಂಎಲ್) ಲಿಬರೇಶನ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಾಮಪ್ಪನವರು ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾಗಿ ಹಲವಾರು ವರ್ಷ ಶ್ರಮಿಸಿದರು. ಕೆಲವು ವರ್ಷಗಳು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿದರು. ಅಯರ್ಲಾ ಮತ್ತು ಎಐಕೆಎಂ ಜನಸಂಘಟನೆಗಳ ಪ್ರಭಾರಿಯಾಗಿದ್ದರು.

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯವಾಗಿದ್ದರು. ಗ್ರಾಮೀಣ ಬಡವರು, ದಮನಿತರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗದಿದ್ದರೂ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.

ಸಿದ್ದಲಿಂಗಯ್ಯ ನಮನ

By CPIML (not verified) |

ಸುಪ್ರಸಿದ್ದ ಬಂಡಾಯ ಸಾಹಿತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಿಧನರಾಧರು. ಅವರು ಸಾವಿರದ ಓಂಬೈನೂರು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಎಡಪಂಥೀ ಯ ಮತ್ತು ದಲಿತ ಚಳುವಳಿಯ ಮುಖ್ಯ ಪ್ರತಿನಿದಿಯಾಗಿದ್ದವರು. ನಮ್ಮ ದೇಶದ ಕ್ರಾಂತಿಕಾರಿ ಮತ್ತು ಜನಪರ ಚಳುವಳಿಯ ಅತ್ಯಂತ ಉತ್ಕ ರ್ಷದ ಪರ್ವ 70 ರ ದಶಕ ಕಾಲ. 67 ರ ನಕ್ಸಲಬಾರಿ, ವಿಯತ್ನಾಮ್ ಯುದ್ಧ, ಪ್ರಪಂಚಾದ್ಯಂತ ಅಮೆರಿಕನ್.ಸಾಮ್ರಾಜ್ಯ ಶಾಯಿಯ ವಿರುದ್ಧ ಪ್ರತಿರೋಧ. ಎಲ್ಲಾ ದೇಶಗಲ್ಲಿ ವರ್ಗ ಹೋರಾಟ ಗಳಿಂದಾಗಿ ಎಲ್ಲೆಡೆಯಲ್ಲಿಯೂ ಕ್ರಾಂತಿಕಾರಿ ಸನ್ನಿವೇಶ. ಅದೇ ಸಮಯದಲ್ಲಿ ಅಮೆರಿಕದ ಕಪ್ಪು ಜನರ ಬ್ಲ್ಯಾಕ್ ಪ್ಯಾಂಥರ್ ಚಳುವಳಿ ಎಲ್ಲರ ಗಮನ ಸೆಳೆದಿತ್ತು.