ಸಿದ್ದಲಿಂಗಯ್ಯ ನಮನ

By CPIML (not verified) |

ಸುಪ್ರಸಿದ್ದ ಬಂಡಾಯ ಸಾಹಿತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರು ಇತ್ತೀಚೆಗೆ ನಿಧನರಾಧರು. ಅವರು ಸಾವಿರದ ಓಂಬೈನೂರು ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಂಡು ಬಂದ ಎಡಪಂಥೀ ಯ ಮತ್ತು ದಲಿತ ಚಳುವಳಿಯ ಮುಖ್ಯ ಪ್ರತಿನಿದಿಯಾಗಿದ್ದವರು. ನಮ್ಮ ದೇಶದ ಕ್ರಾಂತಿಕಾರಿ ಮತ್ತು ಜನಪರ ಚಳುವಳಿಯ ಅತ್ಯಂತ ಉತ್ಕ ರ್ಷದ ಪರ್ವ 70 ರ ದಶಕ ಕಾಲ. 67 ರ ನಕ್ಸಲಬಾರಿ, ವಿಯತ್ನಾಮ್ ಯುದ್ಧ, ಪ್ರಪಂಚಾದ್ಯಂತ ಅಮೆರಿಕನ್.ಸಾಮ್ರಾಜ್ಯ ಶಾಯಿಯ ವಿರುದ್ಧ ಪ್ರತಿರೋಧ. ಎಲ್ಲಾ ದೇಶಗಲ್ಲಿ ವರ್ಗ ಹೋರಾಟ ಗಳಿಂದಾಗಿ ಎಲ್ಲೆಡೆಯಲ್ಲಿಯೂ ಕ್ರಾಂತಿಕಾರಿ ಸನ್ನಿವೇಶ. ಅದೇ ಸಮಯದಲ್ಲಿ ಅಮೆರಿಕದ ಕಪ್ಪು ಜನರ ಬ್ಲ್ಯಾಕ್ ಪ್ಯಾಂಥರ್ ಚಳುವಳಿ ಎಲ್ಲರ ಗಮನ ಸೆಳೆದಿತ್ತು.