ಕಾಮ್ರೇಡ್ ಇದ್ಲಿ ರಾಮಪ್ಪ ಗ್ರಾಮೀಣ ಬಡಜನರ ಸ್ಪೂರ್ತಿಜನಕ ಹೋರಾಟಗಾರ

By Lekha |

ಡಿಸೆಂಬರ್ 31, 2023 ರಂದು 60 ವಯಸ್ಸಿನ ಕಾಮ್ರೇಡ್ ಇದ್ಲಿ ರಾಮಪ್ಪ ಅವರು ಹೃದಯಾಘಾತದಿಂದ ತೀರಿಕೊಂಡರು. ಸಿಪಿಐ (ಎಎಂಎಲ್) ಲಿಬರೇಶನ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಾಮಪ್ಪನವರು ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾಗಿ ಹಲವಾರು ವರ್ಷ ಶ್ರಮಿಸಿದರು. ಕೆಲವು ವರ್ಷಗಳು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿದರು. ಅಯರ್ಲಾ ಮತ್ತು ಎಐಕೆಎಂ ಜನಸಂಘಟನೆಗಳ ಪ್ರಭಾರಿಯಾಗಿದ್ದರು.

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯವಾಗಿದ್ದರು. ಗ್ರಾಮೀಣ ಬಡವರು, ದಮನಿತರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗದಿದ್ದರೂ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.